Monday, February 24, 2014

ದೇವರ ಹುಡುಕಾಟದಲ್ಲಿ



ನೀನೇನು ಬಲ್ಲೆ ಜೀವನದ ಹೊರೆ
ಭೂಲೋಕಕ್ಕೆ ಕಳಿಸಿ ಆಗಿರುವೆ ದೊರೆ

ಹೇಗೆ ಮಾಡಲಿ ನಾ ನಿನಗೆ ಕರೆ
ಎಷ್ಟು ಉಜ್ಜಿದರೂ ಬರದು ಈ ಜೆವನದಿಂದ ನೊರೆ

ನಿನ್ನ ಹೆಸರು ಭೂಲೋಕದಲ್ಲಿ ಹಲವು
ನಿನ್ನೋಲಿಸಿದರೆ ಬರುವುದು ಎಲ್ಲಿಲ್ಲದ ಬಲವು
ಎಲ್ಲಾರು ತೋರಿಸುವರು ದಾರಿಗಳು ಹಲವು
ಏನು ಮಾಡಲಿ ಗಳಿಸಲು ನಾ ನಿನ್ನ ಒಲವು

ಹುಡುಕಾಡಿದೆ ಎಲ್ಲಾ ಗುಡಿ-ಗುಂಡಾರಗಳ
ಕೂಡಿಸಲು ಹೊರಟಿದ್ದೆ ಸ್ವರ್ಗಕ್ಕೆ ನಳ
ಸಿಗಲಿಲ್ಲ ನನಗೆ ಸೂಕ್ತವಾದ ಸ್ಥಳ
ಗೊತ್ತಾಯ್ತು ನನಗೆ ನೀ ಸಿಗುವುದೇ ವಿರಳ

ಅರಿವಾಯ್ತು ನನಗೀಗ ನೀನೆಲ್ಲೂ ಇಲ್ಲ
ಮೋಸ ಹೋದೆ ನಾ ಕೇಳಿ ಜನರೇಳಿದ ಸುಳ್ಳ
ನನ್ನಲೊಳಗೆ ನೀನುರುವೆ ಹೌದೇನೋ ಕಳ್ಳ?
ಇನ್ನ್ಯಾರೂ ಮಾಡರು ನನಗೆಂದೂ ಮಳ್ಳ




ದುಡ್ಡಿನ ಘಂಟಾನಾದ

ದುಡ್ಡು ದುಡ್ಡು ದುಡ್ಡು
ಇದ್ದ್ರೆ ಬಂದ್ ಹೊಡಿ ಷದ್ದು
ತಿನ್ನೋಕ್ ಸಮಯ ಇಲ್ಲ ಹೊಟ್ಟೆಗೆ ಎರಡ್ ಫಡ್ದು
ಬಡ್ಕೊಂತಿ ಯಾಕೆ ದುಡ್ಡು ದುಡ್ಡು ದುಡ್ಡು

ಗಳಿಸೋ ಹುಚ್ಚಲ್ಲಿ ದುಡ್ಡು
ಆಗೋಯ್ತು  ಪೂರ್ತಿ ಬಾಲ್ಡು
ಕಾಣ್ತಾರೆ ನಿಂಗೆ ಎಲ್ಲ ಜನ್ರು ಮ್ಯಾಡು
ಇನ್ನೂ ಬೇಕಾ ನಿಂಗೆ ದುಡ್ಡು ದುಡ್ಡು ದುಡ್ಡು

ಹೋಗ್ಲಿ ಗಳಿಸದೆ ಅನ್ಕೋ ದುಡ್ಡು
ನಿನೇನ್ ಆಗೇ ಬಿಟ್ಯ ಗಾಡು ?
ನಿನಗೂ ಬೇಕು ತಿನ್ನೋಕ್ ಪಲ್ಯ ಎರಡೇ ಸೂಡು
ಇನ್ನೂ ಬೇಕಾ ನಿಂಗೆ ದುಡ್ಡು ದುಡ್ಡು ದುಡ್ಡು

ನೆನಪಿದೆಯ ಹುಟ್ಟಿರೋ ದಿನ?
ಆವತ್ತು ಎಷ್ಟು ಇತ್ತು ಜೋಬಲ್ಲಿ ಹಣ?
ದುಡ್ದಾದರೇನು, ಗಳಿಸಿರುವೆಯಾ ಸಮಾಜದಲ್ಲಿ ಸ್ಥಾನ ಮಾನ?
ಗಳಿಸಲೇ ಬೇಕಾದದ್ದು ನಾಲ್ಕು ಜನರನ್ನ, ಕೇಡುಗಾಲದಲ್ಲಿ ಹೇಳಲು ಸಮಾಧಾನ

Friday, February 21, 2014

ಬಿ ಇ ಸಿ ಅಭಿಯಂತರರು

ಇಲ್ಲಿ ಬರೆದಿರುವಂತಹ ಎಲ್ಲಾ ವಿಷಯಗಳು ಹಾಸ್ಯ ಹಾಗೂ ಟೈಮ್ ಪಾಸ್ ಮಾಡುವ ಕಥೆಗಳು, ಯಾರೂ  ಇದನ್ನು  ಓದಿ ತಲೆ, ಅಥವಾ ಮೈ ಪರಚಿಕೊಂಡು ಯಾರ ಜೊತೆ ಕೂಡ ಜಗಳ ಮಾಡದೆ ಓದಿ ಮಜಾ ಮಾಡಬೇಕಾಗಿ ವಿನಂತಿ.
ಯಾವದೇ ವಿಷಯ ನಿಮ್ಮ ವ್ಯಕ್ತಿತ್ವ ಅಥವಾ ಪ್ರೊಫೆಶನಗೆ ಧಕ್ಕೆ ತರುವ ಹಾಗೆ ಎನಿಸಿದರೆ, ನಾನು ಕಾಗೆ ಹಾರಿಸಿತಿರುವೆ ಅಂತ ಭಾವಿಸಿ ಮರೆತು ಬಿಡಿ

ನೀವೇನಾದರು ಮೆಂಟಲ್, ಮಾನಸಿಕ ಅಥವಾ ಮೆಂಟಲ್ imbalance ಇಂದ ಬಳಲುತ್ತಿದ್ದರೆ ಇಲ್ಲಿಗೆ ನಿಲ್ಲಿಸಿ, ಪ್ರಾಣೇಶ್ ಅವರ ಆಡಿಯೋ ಕೇಳಿ ಪುನಃ ಬನ್ನಿ

ಹೋಗ್ಲಿ ಶುರು ಹಚ್ಚಿಕೊಳ್ಳೋಣಾ ?

ಎಲ್ಲ ದಿಕ್ಕಿನಲ್ಲಿ, ಎಲ್ಲಾ ಬೀದಿಗಳಲ್ಲಿ ಇರುವ ಮನೆಗಳಲಿ ಇರುವ ಹುಡುಗಿಯರ ಪಟ್ಟಿ ಪಟಿಸಿ, ಶಾಲೆಯ ಸಮಾಜ ಶಾಸ್ತ್ರದ ಪುಸ್ತಕ ಪಟಿಸದೇ , ಕಾಲೇಜು ಮತ್ತೆ ಸರ್ಕಲ್ ಕಟ್ಟೆಗಳ ಮೇಲೆ ಕುಳಿತು ಹರಟೆ ಹೊಡೆಯುವ ಹುಡುಗರ ಗುಂಪು.

ಪರೀಕ್ಷೆ ಮುಗಿದು, ಪಾಸ್ ಅಥವಾ ನ-ಪಾಸ್ ಆಗಿದ್ದೇನೆ ಅಂಥ ಗೊತ್ತೇ  ಇಲ್ಲದಿರುವ  ಈ ಹುಡುಗರಿಂದ ಬರುವುದು ಅಭಿಯಂತರರ ಕಂಪು

 ಹೋಗ್ಲಿ ಅಭಿಯಂತರ ಅಂದ್ರೆ ಇನ್ನು ತಿಲಿಯಲಾಗದಿದ್ದಲ್ಲಿ , ಅದರ ಅರ್ಥ ಇಂಜಿನಿಯರ್ ಸಾಹೇಬ್ರು ಅಂತ.
ಇದೆ ಹಿನ್ನೆಲೆಯಲ್ಲಿ ಕೆಲವರ ಜಾತಕ, ಅಥವಾ ಕುಂಡಲಿ ಹಾಕುವ ಪ್ರಯಾಸ ಮಾಡಿರುತ್ತೇನೆ, ಓದಿ, ಹಾರಿಸಿ ಬೂದಿ ಮರೆತು ಬಿಡಿ... 

ಗಣಕತಂತ್ರ ಅಭಿಯಂತರರು (ಸಾಫ್ತ್ವೇರೆ ಇಂಜಿನಿಯರ್) ಕಥೆ 
ಕುರುಡರಲ್ಲಿ ಮೆಳ್ಳ ಕಣ್ಣು ಶ್ರೇಷ್ಟ ಅನ್ನೋ ಗಾದೆ ಮಾತಿನಂತೆ ಈ ಜೀವದ ಕಥೆ. ಓದುವ ಹವ್ಯಾಸ ತುಂಬಾ ಇರುವ ಈ ಜೀವ, ಡಾಕ್ಟರ್  ಆಗುವ ಕನಸು ಕಂಡು, ಸೀಟ್ ಸಿಗದ ಕಾರಣ ಇಂಜಿನಿಯರ್ ಆಗಲು ಬಂದಿರುವ ಜೇವ. ಕೆಲವರು ಕಂಪ್ಯೂಟರ್ ಅಂದ್ರೆ ಇಷ್ಟ, ಕೆಲವರು ಅಪ್ಪ, ಅಮ್ಮ, ಅಣ್ಣ ಅಥವಾ ಯಾವದೋ ಒಬ್ಬ ಸಂಭಂದಿಕ ಹೇಳಿದ ಕಥೆ ಕೇಳಿ ಸೀಟ್ ಆಯ್ಕೆ ಮಾಡಿಕೊಂಡು ಬಂದಿರುವ ಜೀವಗಳೂ ಸಾಕಷ್ಟು ಸಿಗುವವು.

ಹುಡುಗಿಯರನ ಕನ್ನೆತ್ತಿ ನೋಡದೆ, ಗುರುಗಳ ಜೈಕಾರ ಹಾಡುತ, ಕಾಲೇಜಿನ ಉತ್ತಮ ಶಿಷ್ಯ ಅನಿಸಿಕೊ ಆಸೆ ಇವರದು

ಇಲೆಕ್ಟ್ರಾನಿಕ್ ಇಂಜಿನಿಯರ್
ಇವರು ಪಾಪ, ತ್ರಿಶಂಕು ಪರಿಸ್ತಿತಿಯ ಭೂತಗಳು. ಇತ್ತಕಡೆ ಹೈ-ಫೈ ಮಾರ್ಕ್ಸು ಇಲ್ಲ, ಇತ್ತಕಡೆ ಜುಜಬಿ ಮಾರ್ಕ್ಸು ಇಲ್ಲ, ಮಧ್ಯೆ ಸಿಕ್ಕಿಕೊಂಡ ಸೀದಾ ಸಾದಾ ಜೀವಿಗಳು
ಇವರಿಗೆ ಅಬ್ಯಾಸದ ಕಡೆ ಗಮನ ಹರಿಸದೆ ಹೋದರೆ ಕೈಗೆ ಚಂಬು ಕಂಪಲ್ಸರಿ , ಇವರ ವಿಷಯಗಳೇ ಅಷ್ಟು ಕಠಿಣ

ಮೆಕ್ಯಾನಿಕಲ್ ಇಂಜಿನಿಯರ್
ಇವರು ನೋಡ್ರಿ ಕಾಲೇಜಿನ ಗೋಡೆಗಳಿಗೆ ಬಣ್ಣ ಹಚ್ಚುವ, ಜುಜಬಿ ಮಾರ್ಕ್ಸು ಪಡೆದು, ಪಾಸ್ ಯಾವ ಮೇಷ್ಟ್ರು ಮಾಡಿದ್ದು ಅಂತ ಕೂಡ ಗೊತ್ತಿಲ್ಲದ ಮಹಾನ್ ಜೀವಗಳು
ತಮ್ಮ ಸ್ವಂತ ಕ್ಲಾಸ್ ಬಿಟ್ಟು ಎಲ್ಲ ಕ್ಲಾಸಿನ ವಿಳಾಸ ಗೊತ್ತಿರುವ ಏಕಮಾತ್ರ ಶಿಷ್ಯರ ಗುಂಪು. ಓದಿದರೆ ತಲೆಯಲಿ ಶಬ್ದ ಕೂಡ ಇಳಿಯದ, ಬರೆಯಲು ಪೆನ್ ಕೂಡ ಸಾಕದ ನಿಷ್ಟಾವಂತ ಗಲಾಟೆ ಕೋರರು ಇವರೆ

ಸಿವಿಲ್, ಎಲೆಕ್ಟ್ರಿಕಲ್ ಹಾಗೂ ಮತ್ತಿತರರು 
ಇವರೂ ಸ್ವಲ್ಪ ಮೆಕ್ಯಾನಿಕಲ್ ಥರ ಜೀವಿಗಳೇ ಹೊರತು ಇವರಿಗೆ ಸ್ವಲ್ಪ ಅಂಜಿಕೆ, ಮಾನ, ಮರ್ಯಾದೆ ಅನ್ನೊ ಕೆಲವಾದ ಶಬ್ದಗಳ ಪರಿಚಯ ಅಷ್ಟೇ.
ಬೇರೆ ಎಲ್ಲಾ ಬ್ರಾಂಚಿನ ಸಿಷ್ಯರ ಜೊತೆ ಇವರ ವಹಿವಾಟು ಸ್ವಲ್ಪ ಜಾಸ್ತಿ, ಮೆಕ್ಯಾನಿಕಲ್ ಮಹಾನುಭಾವಗಳು ಇವರಿಗೆ ಬಾಡಿ ಗಾರ್ಡ್ ಥರ, ಇವರ ಕ್ಲಾಸಿನ ಹುಡುಗಿಯರಿಗೆ ಬಂದೋಬಸ್ತ್ ಮಾಡೋ ಜವಾಬ್ದಾರಿ ಮೆಕ್ಯಾನಿಕಲ್ ಹುಡುಗರದೆ.
ಬೇಲಿಯೇ ಎದ್ದು ಹೊಲ ಮೇಯುವ ಗಾದೆ ಮಾತಿನಂತೆ, ಹುಡುಗಿಯರನ ಪಟಾಯಿಸುವ ಕಾರ್ಯ ಯಾರದು ಅಂತ ಗೊತ್ತಾಗಿರಬಹುದು 

ಕಲ್ಚರಲ್ ಅಕ್ಟಿವಿಟಿಗಳಲ್ಲಿ ಇವರು ಎತ್ತಿತ ಕೈ ಆಟ, ಓಟ, ಕುಣಿತ ಹಾಗೂ ಇನ್ನಿತರ ಸಾಂಸ್ಕೃತಿಕ ಆಚರಣೆಗಳು ಇವರ ಮುಖ್ಯ ಕೆಲಸಗಳು

ಇಂದು ಶುಕ್ರವಾರ




ಮಗನ ಚೆಲ್ಲಾಟ, ಅಪ್ಪನ ತೂಗಾಟ 

ಇಂದು ಶುಕ್ರವಾರ,
೯೦ ಇಳಿಸುವಾರ,
ಗೆಳೆಯರೆಲ್ಲ ಸೇರಿ ಹೊಗೆಯ ಆಡಿಸುವಾರ

ಹೇಗೋ ಸರ್ಕಸ್ ಮಾಡಿ,
ಕುಡಿದು ಬಿಟ್ಟೆ ಓಡಿ ,
ಸೇದಲು ಸಿಗಲ್ಲಿಲ್ಲ ಒಂದೂ ಬೀಡಿ

ಅರಿವೇ ಇರಲಿಲ್ಲ ಒಂದು ಬಿಡಲಾರದ ಜೋಡಿ,
ಬಿಡಲಿಲ್ಲ ಮಗ ಕಾಡಿ ಕಾಡಿ,
ಮಲಗಿಸ್ ಬೇಕ್ ಅವನಿಗಿ ಮಕ್ಕಳ್ ಗೀತೆ ಹಾಡಿ ಕೊಂಡಾಡಿ,

ಮುಂದೆ ಬರುವ ಶುಕ್ರವಾರ,
ಬಾಯಿಗೆ ಕಟ್ಕೊ  ದಾರ ,
ಹೆಂಡ್ತಿಗಿ ಸಿಟ್ಟ  ಬಂದ್ರೆ ನಿನ್ನ್ ಫೋಟೋಗ್  ಬಿಳ್ತೆ ಹಾರ


ಒಬ್ಬ ವಿದ್ನಾಣಿಯ ಕಥೆ
ಮನೆಯೊಳಗಿನ ಹಳೆಯ ಸಾಮಾನುಗಳ್  ಉಪಯೋಗಿಸಿ
ತಲೆಯೊಳಗಿನ ಹುಳಗಳನ್  ಕೆರಳಿಸಿ,
ಅಳಿದುಳಿದ ವಿಚಾರಗಳನ್ ಅರಳಿಸಿ,
ಬಳಸಿ ತೆವಳಿಸಿ ಆಸಕ್ತಿಗಳನ್ ಬೆಳೆಸಿ,
ಹಳಿಸಿದ ಬುದ್ಧಿಗಳನ್ ಸುವಾಸನೆಗಳಿಸಿ
ತಯಾರಿಸಿದ ಸಾಮಗ್ರಿಗಳನ್, ಯಂತ್ರಗಳನ್ ನೋಡಲ್ ಬನ್ನಿ
ಪ್ರಕಾಶ್ ಸಿದರಡ್ಡಿಯ ಮನೆಯೊಳ್



Monday, February 17, 2014

ಏನರೆ ಬರಿತಾನ್ರಿ ಪಾ

ಭಾಳ ದಿಣಗೋಳ ಆದು ಏನೂ  ಬರದಿಲ್ಲ ಅಂತ ಕೈ ಕೆರ್ಯಾಕತ್ತಿತ್ತು , ಅದಕ್ಕ ಏನರೆ ಗೀಚಿ ಬಿಡುನೂ  ಅಂತ ಅನಕೊಂಡೆನ್ ನೋಡ್ರಿಪಾ ... ತಲಿ ತಿಂಧಂಗ ಆಗತಿದ್ರು ಏನ್ ಮಾಡಕ್ ಆಗಂಗಿಲ್ಲ, ಯಾಕಂದ್ರ ನಾ ಏನ್ ನಿಮ್ಮ ಅಪ್ಪನ ಮನೀ ಗಂಟ ತಿಂದಿಲ್ಲ :-)

ಮಾನಸಿಕ ಆಗಬ್ಯಾಡ್ರಿ ಪಾ, ಸುಮ್ಮ್ ಹಂಗ ಅನ್ನಿ... 

ಮದಿವಿ ಆತು, ಮಗಾ  ಆದ, ಮಣಿ, ಗಾಡಿ  ... ಎಲ್ಲಾ ಆತು, ಆದ್ರ ಹಳಿ ಲೈಫ್ ಮರ್ತ ಬಿಟ್ನಲ್ಲಾ  ಅಂತ ತಲೀ ಕೆಟ್ಟ ಹೋಗಿತ್ತು ... ಖರೆ, ಹೊಳ್ಳಿ ಬರಸಬಹುದು ಅಂತ ಸುದಕ   ಮರ್ತ್ ಹೋಗಿತ್ತ ನೋಡ್ರಿಪಾ ...

ಅದಕ್ಕ ಬಾಯನ ಹಲ್ಲ, ತಲ್ಯಾನ್ ಕೂದ್ಲ ಎಲ್ಲಾ ಕಿತಗೊಂಡ ಹೋಗುದ್ರೊಳಗ ಉಳಸು ಪ್ರಯತ್ನ ಅರೆ ಮಾಡುನು ? ಏನಂತೀರಿ ?

ಹಿಂತ ಕಥಿ ಬರ್ಯವ್ರು ಹೆಚ್ಚಾನ್ ಹೆಚ್ಚ ಹುಚ್ಚರ ಇರತಾರ್ ಯಾಕ ಅಂದ್ರ ನನ್ನ ದೋಸ್ತರ ಪಟ್ಟಿ ಒಳಗ ಇಬ್ಬ್ರು ಸಿಕ್ಕಾರ ಅವರೂ ಹಿಂತಾದ ಕೆಲಸಾ  ಮಾಡ್ತಾರ , ಉದಾಹರಣಿಗಿ ಪ್ರಕಾಶ ಬಾಬು(ವೈದ್ಞಾನಿಕ )(http://prakashsidaraddi.blogspot.in/) , ಸಿಧ್ಧಾರ್ಥ ಭಟ್ಟ(ಸಾಹಿತಿ)( http://manadani.blogspot.com/). ನಾ ಇವರಿಬ್ರ  ನಡಕಿನ್ನಾವ ನೋಡ್ರಿಪಾ

ಹೋಗ್ಲಿ ಪಾಯಿಂಟ್ ಗಿ ಬರುನು , ತಳಗ ಒಂದಿಷ್ಟು ಸನ್ನು-ಸನ್ನು ಹನಿಗವನ ಬರೀತೆನಿ, ಉತ್ತರ ಕರ್ನಾಟಕದ ಭಾಷೆ ಒಳಗ , ಮನಸ್ಸಿಗೆ ಹಚ್ಹ್ಕೊದಂಗ ಓದಿ ಮಜಾ ಮಾಡ್ರಿ , ಇಲ್ಲಂದ್ರ ನಿಮಗ ಗೊತ್ತ್  ಐತಿ ಅಲ್ಲ, ನಾ ಏನ್ ನಿಮ್ಮ ಅಪ್ಪನ ....

೧.  ಕೈಯಾಗ ಹಿಡದೇನಿ ಲ್ಯಾಪ್ಟಾಪು,
     ತಲೀ ಒಳಗ ಬರೀ ತಾಪು ತಾಪು ,
     ಮೈ, ಕೈ ಅನ್ತಾವ ಬಿಡ ಸಾಕು ಸಾಕು ,
     ಏನ್ ಮಾಡ್ಲಿ ಅವನೌನ್ ಕಂಪನಿಕೊಡಂಗಿಲ್ಲ ಹೈಕು ಹೈಕು

ಹೆಂಗ್ ಇತ್ತ ? ತೊಗೊರಿ ಇನ್ನೊಂದ

೨. ಹೊಸ ಮೊಬೈಲ್ ತೊಗೊಂಡಾನ  ಗೂಗಲ್ ನೆಕ್ಸಸ್
     ಕಾರಣ ಹೇಳ್ತಾನ ಹಳೀ ಮೊಬೈಲ್ ಇತ್ತ ಭಾಳ ಸಾವಕಾಸ್
     ಕಿಸ್ಯಾಗ ರೋಕ್ಕ್ ಹೆಚ್ಚಾಗಿದ್ರ ಹೆಂತಿಗಿ ಒಂದ ಸೀರಿನೂ ತರಬಹುದ್ ಇತ್ತ
     ದೊಸ್ತ್ರ ಅಂತಾರು, ತಿಂಡಿ  ಕೇಳಾಂಗ್ ಇಲ್ಲ ಹೊಯ್ಕೊಂತ ಹೋಗ ಅತ್ತ

ಇನ್ನೂ ಬೇಕಾ ? ತೊಗೊ ಅವನೌನ್

೩. ಕಟ್ಟಿ ಮ್ಯಾಲ್ ಕುಂತ ಹರಟೆ ಹೊಡ್ಯು ಹೆಂಗಸೂರ್ ಚೊಲೊ
     ಎಲ್ಲಾ ಮುಗದ್ ಮ್ಯಾಲ್ ಹೆಂಗಸೂರ್ ಅಂತಾರ್ ನಾಳಿ ಸಿಗುನ್ ಚಲೋ
     ಕುಡ್ಯಾಕ್ ಕುಂತ ದೋಸ್ತರ ಭಾಳ ಕೆಟ್ಟ
     ಹಳೀ ನೇನಪ ತಗದ್ ಹೊಗ್ತಾರ ತಲ್ಯಾಗ್ ಹುಳಾ ಬಿಟ್ಟ
     
೪. ಖಾಲಿ ತಲಿ ಸ್ಮಶಾನ ದಂಗ ಅಂತ
     ಕೇಳ್ರಿ  ಇಲ್ಲಿ , ಖಾಲಿ ತಲಿ ಸ್ಮಶಾನ ದಂಗ ಅಂತ
     ಉದಾಹರಣಿ ನೋಡ್ರಿ, ದಿಲ್ಲಿ ಒಳಗ ಆಮ್ ಆದ್ಮಿ ಪಾರ್ಟಿ ಬಂತ

೫. ಮೋದಿ ಗಿ ವೋಟ್ ಹಾಕಿ ದೇಶ ಉಳಿಸ್ರಿ
     ಇಲ್ಲಾಂದ್ರ ಹಾಳ್ ಭಾವಿಗಿ ಬಿದ್ದ ಸಾಯ್ರಿ

೬.  ಎಲ್ಲಾ ಓದಿದ ಮ್ಯಾಲ್ ಚೊಲೋ ಅನಿಸಿದ್ರ ಕೆಳಗ ಒಂದೆರಡ ಕಮೆಂಟ್ ಬಿಡ್ರಿ
      ಇಲ್ಲಾ ಅಂದ್ರ ಬಸ್ ಸ್ಟಾಂಡ್ ನ್ಯಾಗ್ ಗಾಡಿ ರೆಡಿ ಐತಿ, ಮನಿಗಿ ನಡ್ರಿ

೭. ಮನಸ್ಸಿಗಿ ಹಚ್ಕೊ ಬ್ಯಾಡ್ರಿ , ಇದರಾಗ್ ಏನ್ ಪರ್ಸನಲ್ ಇಲ್ಲ
     ನಾ ಯಾರ್ ಅಂತ ನಿಮಗ ಗೊತ್ತ ಐತಿ ಅಲ್ಲ?
     ಹೆಚ್ಚು  ಕಡಿಮಿ ಅಂದ್ರ ಕೊಡತೆನಿ ಎರಡ, ಕೆಂಪ ಆಕಾವ ಎರಡು ಗಲ್ಲ


ಹೋಗ್ಲಿ ಮಜಾಕ್ ಸಾಕು, ಮತ್ತೊಮ್ಮಿ ಮೂಡ ಬಂದಾಗ್ ಏನರೆ ಬರಿತೆನಿ, ಅಲ್ಲಿ ತನಕ... ಟಾಟಾ ಬಾಯಿ ಬಾಯಿ